ಪ್ರಕಾಶನ : ಹೇಮಂತ ಸಾಹಿತ್ಯ
ಋುಜು ಬಾಳ್ವೆ ನಡೆಸಬೇಕೆಂಬ ಆಕಾಂಕ್ಷೆ ಎಲ್ಲರ ಮನಸ್ಸಿನಲ್ಲಿದ್ದರೂ ಪರಿಸ್ಥಿತಿ ಅದಕ್ಕೆ ಅಡ್ಡಿ ಆತಂಕಗಳನ್ನೊದಗಿಸುತ್ತದೆ. ಜೀವನದ ದುರ್ಗಮ ಹಾದಿಯಲ್ಲಿ ಅಡಿಯಿಡುವ ಮಾನವ ಎಡವುತ್ತಾನೆ, ತಪ್ಪಿ ನಡೆಯುತ್ತಾನೆ. ಈ ತಪ್ಪು ಅಸಹಾಯಕತೆಯ ಫಲವೋ ದೌರ್ಬಲ್ಯದ ಫಲವೋ ಎಂದು ಸಮಾಜ ಶಾಸಕರು ವಿವೇಚಿಸುವುದಿಲ್ಲ. ಸಮಾಜದ ಕಟೋರ ಮನೋವೃತ್ತಿಗೆ ಸಿಲುಕಿದ ನಿರಪರಾಧಿಗಳು ದಾರುಣ ಕಷ್ಟನಷ್ಟಗಳನ್ನನುಭವಿಸುತ್ತಾರೆ. ಮನಸ್ಸಿನ ರಹಸ್ಯಗಳನ್ನರಿಯಲು ಎರಡು ಮಾರ್ಗಗಳಿವೆ. ಒಂದು ಬುದ್ಧಿಯ ಮಾರ್ಗ, ಇನ್ನೊಂದು ಹೃದಯದ ಮಾರ್ಗ, ಆ ಮಾರ್ಗ ಸ್ಪಷ್ಟವಾಗಿ ಕಣ್ಣಿಗೆ ಕಾಣದಂತೆ ಕವಿದಿರುವ ಮಂಜನ್ನು ನಿವಾರಿಸಲು ‘ಹುಲಿಯುಗುರು’ ಪ್ರಯತ್ನಿಸಿದೆ.











Be the first to review “ಹುಲಿಯುಗುರು / Huliyuguru”