ಪ್ರಕಾಶನ : ಕನಕದಾಸ ಅಧ್ಯಯನ ಸಂಶೋಧನಾ ಪೀಠ
ಎಂ.ಜಿ.ಎಂ. ಕಾಲೇಜು, ಉಡುಪಿ – 576102
ಕನಕದಾಸರು ಮಧ್ಯಕಾಲೀನ ಕರ್ನಾಟಕದ ಹಿರಿಯ ಕವಿಗಳು, ಸಂತರು ಮೇಲಾದ ಕೀರ್ತನಕಾರರು. ಪಂಪನಂತೆ ಏಕಕಾಲಕ್ಕೆ ಕವಿಯೂ ಕಲಿಯೂ ಆಗಿ ಹೆಸರಾಂತವರು. ಹದಿನಾರನೆಯ ಶತಮಾನದ ಮಧ್ಯಕಾಲೀನ ಕನ್ನಡ ಸಾಹಿತ್ಯದ ಏರುಗಾಲವನ್ನು ರೂಪಿಸಿದವರಲ್ಲಿ ಒಬ್ಬರು. ಯಾವುದೇ ಒಂದು ಮತಕ್ಕೆ ಅಂಟಿಕೊಳ್ಳದೆ ಸಕಲ ತತ್ವಗಳನ್ನು ಮೈಗೂಡಿಸಿಕೊಂಡು ನಿರ್ದಿಗಂತವನ್ನು ಮೀರಿ ಬೆಳೆದು ವಿಶ್ವಮಾನವರಾಗಿ ಗುರುತಿಸಿಕೊಂಡವರು ಕನಕದಾಸರು. ಸಮಾಜದ ಕೆಳಸ್ತರದಿಂದ ಮೇಲಕ್ಕೆ ಬಂದು ವೈಯಕ್ತಿಕ ಸಾಧನೆಯಿಂದ ಅರಿವಿನ ಮೇಲುಪ್ಪರಿಗೆಯನ್ನೇರಿ, ಎಲ್ಲ ಸಾಮಾಜಿಕ ಪ್ರತಿರೋಧವನ್ನು ಮೆಟ್ಟಿನಿಂತು ದಾರ್ಶನಿಕರಾದರು. ದಾಸರಾಗಿ ಹೆಸರು ಮಾಡಿದರು.










Be the first to review “ರಾಮಧಾನ್ಯ ಚರಿತ್ರೆ / Ramadanya Charithre”